Thursday, 10 November 2011

ಸಾಕು
ಕರುಳ ಬಗೆಯುವ
ಕ್ರೌರ್ಯಕ್ಕೆ
ಹುಸಿನಗೆಯ
ಮುಲಾಮು ಹಚ್ಚಿ
ನಾವೆಲ್ಲಾ ಒಂದೇ ಎಂದಿದ್ದು
ಒಳಗೂ ಹೊರಗೂ
ಇರಿಯುವ
ಕತ್ತಲಲಿ ಭರವಸೆಯ
ಬೆಳಕಿಗಾಗಿ ನಾವು
ಕಣ್ಣನ್ನೇ ಕುರುಡಾಗಿಸಿಕೊಂಡವರು
ಚೂರಿಯ ತುದಿಗೆ
ನೀವು ನಮ್ಮವರೇ ಎಂಬ
ನಂಬಿಕೆಯ ವಿಷ ತುಂಬಿ
ತಣ್ಣಗೆ
ಕೊಂದವರು ನೀವು
ಆದರೂ
ನಮ್ಮ ಗುಟುಕು ಜೀವದೊಳಗಿನ
ಹುಂಬ ವಿಶ್ವಾಸ
ಕೃಶಗೊಂಡ ರಟ್ಟೆಗಳಿಗಿರುವ
ಮೇಲೇಳುವ ತಾಕತ್ತು
ಇನ್ನು ಉಸಿರಾಡುವಂತೆ
ನೋಡಿಕೊಳ್ಳುತಿದೆ...