ಗುರು ದುನಿಯಾ
ಕಣ್ಣಿಗೆ ಕಂಡದ್ದು , ಮನಸಿಗೆ ತೋಚಿದ್ದು..... ಹೀಗಿದೆ ನೋಡು ಗೆಳೆಯ....
Monday 7 November 2011
ನೀನು
ನಿಜವಾಗದ
ಕನಸೆಂದು
ನನ್ನ ಮನಸಿಗೆ ಗೊತ್ತಿದೆ
ಕನಸಿನಲ್ಲಾದರೂ
ನಿಜವಾಗಲಿ ಎಂದು
ಅದು ಕಾಯ್ತಿದೆ ..
ಪ್ರೀತಿ
ಮುಂಜಾನೆಯ
ಎಳೆ ಬಿಸಿಲ
ಸ್ಪರ್ಶಕ್ಕೆ
ಮಂಜು ಕರಗಿ
ನೀರಾದ ರೀತಿ
ನಿನ್ನೊಲವ
ಚಿಲುಮೆ ಬತ್ತಿ
ನನ್ನೆದೆಯ
ಹೊಲವೀಗ
ಬರಡು ಬರಡು ..
ನಿನ್ನೆಲ್ಲ
ಒಲವು
ಮಳೆಯಾಗಿ
ಸುರಿದು
ಬರಡಾದ
ಹೃದಯದಲಿ
ಹಸಿರು
ಚಿಗುರಿಸಲಿ
...
ನನ್ನ
ಬದುಕಿನ
ಕತ್ತಲ ದಾರಿಗೆ
ನಿನ್ನ ನಗೆಯೇ
ಬೆಳದಿಂಗಳು
ಹೊಳೆವ
ಬೆಳಕನು ಕಂಡು
ನಾಚಬೇಕು
ಆ ಚಂದ್ರನು ..
..
Newer Posts
Older Posts
Home
Subscribe to:
Posts (Atom)