Monday 13 February 2012

ಜಡ್ಡುಗಟ್ಟಿದ ದೇಹ
ಬಿರಿದ ಅಂಗಾಲು
ಸಿಮೆಂಟು ಧೂಳಿನಲಿ
ಬದುಕಿನ ಕನಸು ಮಸುಕು ಮಸುಕು
ಚೀಲಕ್ಕೆ ಕೊಕ್ಕೆಯಿಟ್ಟು
ಹೆಗಲ ಮೇಲೇರಿಸಿ
ಹೆಜ್ಜೆ ಮುಂದಿಟ್ಟಾಗ ಎದೆಯಲ್ಲಿ
ಹಸಿವಿನ ರುದ್ರ ನರ್ತನ
ತಿಂದ ಅನ್ನ ಅರಗುವುದಿಲ್ಲ
ಅವನಿಗಾಗಿ
ಯಾವ ಜೀವವು ಮರುಗುವುದಿಲ್ಲ
ಎದೆಯೊಳಗೆ ಕೆಂಡವಿಟ್ಟುಕೊಂಡವನ
ಸಂಕಟಕ್ಕೆ ಸಹಕಾರ ನೀಡಲು
ಕಣ್ಣೀರಿಗೂ ಮನಸಿಲ್ಲ ..