ಸಾಕು
ಕರುಳ ಬಗೆಯುವ
ಕ್ರೌರ್ಯಕ್ಕೆ
ಹುಸಿನಗೆಯ
ಮುಲಾಮು ಹಚ್ಚಿ
ನಾವೆಲ್ಲಾ ಒಂದೇ ಎಂದಿದ್ದು
ಒಳಗೂ ಹೊರಗೂ
ಇರಿಯುವ
ಕತ್ತಲಲಿ ಭರವಸೆಯ
ಬೆಳಕಿಗಾಗಿ ನಾವು
ಕಣ್ಣನ್ನೇ ಕುರುಡಾಗಿಸಿಕೊಂಡವರು
ಚೂರಿಯ ತುದಿಗೆ
ನೀವು ನಮ್ಮವರೇ ಎಂಬ
ನಂಬಿಕೆಯ ವಿಷ ತುಂಬಿ
ತಣ್ಣಗೆ
ಕೊಂದವರು ನೀವು
ಆದರೂ
ನಮ್ಮ ಗುಟುಕು ಜೀವದೊಳಗಿನ
ಹುಂಬ ವಿಶ್ವಾಸ
ಕೃಶಗೊಂಡ ರಟ್ಟೆಗಳಿಗಿರುವ
ಮೇಲೇಳುವ ತಾಕತ್ತು
ಇನ್ನು ಉಸಿರಾಡುವಂತೆ
ನೋಡಿಕೊಳ್ಳುತಿದೆ...
No comments:
Post a Comment