ಗುರು ದುನಿಯಾ
ಕಣ್ಣಿಗೆ ಕಂಡದ್ದು , ಮನಸಿಗೆ ತೋಚಿದ್ದು..... ಹೀಗಿದೆ ನೋಡು ಗೆಳೆಯ....
Monday, 5 September 2011
ಅಗಾಧ
ಕತ್ತಲು
ಬೆಳಕಿನೊಂದಿಗೆ
ಕದನ
ಮಿಂಚುಹುಳು
ನಗುತ್ತಿದೆ ..
ಹಚ್ಚಿಟ್ಟ
ದೀಪ
ಹೊಳೆವ
ಪ್ರತಿಬಿಂಬ
ಇರುಳಿಗೆ
ಸಾವಿರ ಕನಸು
ಉರಿವ
ನೆಲ
ಅಲ್ಲಲ್ಲಿ
ನೀರು
ಹಸಿರ
ಕನಸಿಗೆ ಮುನ್ನುಡಿ
ತುಂಬು
ಹುಣ್ಣಿಮೆ
ಅಲೆಗಳ
ಉಯ್ಯಾಲೆ
ಕಡಲು
ಕಾವ್ಯ
ಬರೆಯುತಿದೆ ....
Monday, 29 August 2011
ಹುಡುಗಿ
ನಿನ್ನ
ಕಣ್ಣಂಚಿಗೆ
ಅದರ
ಸುಳಿಮಿಂಚಿನ ಸಂಚಿಗೆ
ಬಲಿಯಾದೆ
ಈಗ
ರಸ್ತೆಯಂಚಲೇ
ನೆಲೆಯಾದೆ ...
ನಿನ್ನ
ನೆನಪೆಲ್ಲ
ಕಣ್ಣೀರಾಗಿ
ಸುರಿದ ಮೇಲೆ
ಮನಸೀಗ
ಶುಭ್ರ ಶಾಂತ ಸರೋವರ ....
ನಿನ್ನ ಪಾಲಿಗೆ
ನಾನು
ಮುಗಿದ ಅಧ್ಯಾಯ
ಸಂತೋಷವೆಂದರೆ
ನನ್ನ ಬದುಕಿಗೂ
ಇಂದೇ ವಿಧಾಯ
ಹುಣ್ಣಿಮೆಯ
ಚಂದ್ರ
ನಗುತ್ತಿದ್ದಾನೆ
ಇರುಳು
ಬೆತ್ತಲಾಗುತ್ತಿದೆ ....
Friday, 26 August 2011
ನಿನ್ನ
ನೆನಪುಗಳ
ಅಪಶ್ರುತಿಯಿಂದ
ನನ್ನೊಳಗಿನ
ಹೊಸರಾಗವೊಂದು
ಹಾಡಾಗುತ್ತಲೇ
ಇಲ್ಲ .....
Newer Posts
Older Posts
Home
Subscribe to:
Posts (Atom)