ಗುರು ದುನಿಯಾ
ಕಣ್ಣಿಗೆ ಕಂಡದ್ದು , ಮನಸಿಗೆ ತೋಚಿದ್ದು..... ಹೀಗಿದೆ ನೋಡು ಗೆಳೆಯ....
Monday, 5 September 2011
ಹಚ್ಚಿಟ್ಟ
ದೀಪ
ಹೊಳೆವ
ಪ್ರತಿಬಿಂಬ
ಇರುಳಿಗೆ
ಸಾವಿರ ಕನಸು
ಉರಿವ
ನೆಲ
ಅಲ್ಲಲ್ಲಿ
ನೀರು
ಹಸಿರ
ಕನಸಿಗೆ ಮುನ್ನುಡಿ
ತುಂಬು
ಹುಣ್ಣಿಮೆ
ಅಲೆಗಳ
ಉಯ್ಯಾಲೆ
ಕಡಲು
ಕಾವ್ಯ
ಬರೆಯುತಿದೆ ....
Monday, 29 August 2011
ಹುಡುಗಿ
ನಿನ್ನ
ಕಣ್ಣಂಚಿಗೆ
ಅದರ
ಸುಳಿಮಿಂಚಿನ ಸಂಚಿಗೆ
ಬಲಿಯಾದೆ
ಈಗ
ರಸ್ತೆಯಂಚಲೇ
ನೆಲೆಯಾದೆ ...
ನಿನ್ನ
ನೆನಪೆಲ್ಲ
ಕಣ್ಣೀರಾಗಿ
ಸುರಿದ ಮೇಲೆ
ಮನಸೀಗ
ಶುಭ್ರ ಶಾಂತ ಸರೋವರ ....
ನಿನ್ನ ಪಾಲಿಗೆ
ನಾನು
ಮುಗಿದ ಅಧ್ಯಾಯ
ಸಂತೋಷವೆಂದರೆ
ನನ್ನ ಬದುಕಿಗೂ
ಇಂದೇ ವಿಧಾಯ
ಹುಣ್ಣಿಮೆಯ
ಚಂದ್ರ
ನಗುತ್ತಿದ್ದಾನೆ
ಇರುಳು
ಬೆತ್ತಲಾಗುತ್ತಿದೆ ....
Friday, 26 August 2011
ನಿನ್ನ
ನೆನಪುಗಳ
ಅಪಶ್ರುತಿಯಿಂದ
ನನ್ನೊಳಗಿನ
ಹೊಸರಾಗವೊಂದು
ಹಾಡಾಗುತ್ತಲೇ
ಇಲ್ಲ .....
ಬೊಗಸೆ
ತುಂಬ ಪ್ರೀತಿ
ಕಣ್ಣಲ್ಲಿ
ಮುಗಿಯದ
ಕನಸುಗಳ ಬೆಳಕು
ಹೃದಯದಿ
ಸಾವಿರ
ಆಸೆಗಳ ನಗಾರಿ
ನಿನ್ನ ಪ್ರೀತಿಯಲಿ
ನಾನು
ಪೂರ್ಣ ವ್ಯಸ್ತ
ನೀ
ಕೈ ಕೊಡವಿ
ಹೋದೆ ನೋಡು
ಅಲೆಗೆ ಸಿಕ್ಕ
ಮರಳಿನ ಗೋಪುರ
ಕುಸಿದಂತೆ
ಬದುಕಿಂದು ಅಸ್ತವ್ಯಸ್ತ
ಮೋಸ
ಮನದ ಮುಗಿಲಲ್ಲಿ
ಒಲವಿನ
ನಕ್ಷತ್ರವಾಗಬೇಕಿದ್ದ
ನೀನು
ಉಲ್ಕೆಯಂತೆ ಉರಿದು
ನನ್ನನ್ನೇ ಸುಟ್ಟಿದ್ದು......
Newer Posts
Older Posts
Home
Subscribe to:
Posts (Atom)